Thursday 25 September 2014

‘ಮೇಕ್- ಇನ್- ಇಂಡಿಯಾ’ದ ಆಜೂಬಾಜು : ನಾಗೇಶ್ ಹೆಗಡೆ


ಕೃಪೆ: ಪ್ರಜಾವಾಣಿ > ಅಂಕಣಗಳು › ವಿಜ್ಙಾನ ವಿಶೇಷ | ನಾಗೇಶ್ ಹೆಗಡೆ
Thu, 09/25/2014

ಮಂಗಳನ ಕಕ್ಷೆಗೆ ಇದೀಗ ಎರಡೆರಡು ಶೋಧನೌಕೆಗಳು ಒಟ್ಟೊಟ್ಟಿಗೆ ಪ್ರವೇಶ ಮಾಡಿವೆ. ತುಸು ಮುಂದೆ ಮುಂದೆ ಅಮೆರಿಕದ ‘ಮೇವೆನ್’; ಅದರ ಹಿಂದೆ ಹಿಂದೆ ಭಾರತದ ‘ಮಂಗಳಯಾನ’. ಈ ಎರಡರ ಯಶಸ್ಸಿನ ಹಿಂದೆಯೂ ಭಾರತೀಯ ಎಂಜಿನಿಯರ್‌­­ಗಳ ಪಾತ್ರವೇ ಮಹತ್ವದ್ದಿತ್ತೆಂದು ಹೇಳ­ಬ­ಹುದು.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ­ದಲ್ಲೂ ಶೇಕಡ ೩೬ರಷ್ಟು ಭಾರತೀಯರೇ ಇದ್ದಾ­ರೆಂದು 8 ವರ್ಷಗಳ ಹಿಂದೆಯೇ ನಮ್ಮ ಸಂಸ­ತ್ತಿನಲ್ಲಿ ಘೋಷಿಸಲಾಗಿತ್ತು. ಈಗಂತೂ ಶೇಕಡ­ವಾರು ಇನ್ನೂ ಹೆಚ್ಚಿಗೆ ಇರಲೇಬೇಕು.  ಮೇಲಾಗಿ, ಬಾಹ್ಯಾಕಾಶ ನೌಕೆಗೆ ಎಂಜಿನ್‌ಗಳು, ರಾಕೆಟ್‌ಗಳು, ಟೆಲಿಕಾಂ ಸಲಕರಣೆಗಳು ಎಷ್ಟು ಮುಖ್ಯವೋ ಅವಕ್ಕೆಲ್ಲ ಚಾಲನೆ ಕೊಡಬಲ್ಲ ಸಾಫ್ಟ್‌ವೇರ್‌ಗಳೂ ಅಷ್ಟೇ ಮುಖ್ಯವಾಗಿರುತ್ತವೆ. ಆ ಕ್ಷೇತ್ರದಲ್ಲಂತೂ ಅಮೆರಿಕದಲ್ಲೂ ಭಾರತೀ­ಯರೇ ಮುಂಚೂಣಿಯಲ್ಲಿದ್ದಾರೆ.
ಹಾಗಾಗಿ ಈ ಎರಡೂ ನೌಕೆಗಳನ್ನು ಮಂಗಳನ ಸುತ್ತ ಸುತ್ತಿಸು ವಲ್ಲಿ ಭಾರತೀಯ ಹಸ್ತಗಳೇ ಹೆಚ್ಚಿನ ಸಂಖ್ಯೆ­ಯಲ್ಲಿವೆ ಎಂದು ಹೇಳುತ್ತ, ನಮ್ಮ ಹೆಮ್ಮೆಯನ್ನು ಪ್ರಧಾನಿ ಹೇಳಿದ ಹಾಗೆ ಕ್ರಿಕೆಟ್‌ಗೆ ಹೋಲಿಸಿ ಬರೀ ನೂರು ಪಟ್ಟಲ್ಲ, ಇನ್ನೂರು ಪಟ್ಟು ಹಿಗ್ಗಿಸಿ­ಕೊಳ್ಳಲು ಅಡ್ಡಿ­ಯಿಲ್ಲ. 
ಎರಡೂ ನೌಕೆಗಳ ಉದ್ದೇಶಗಳು ಮಾತ್ರ ಭಿನ್ನವಾಗಿವೆ. ನಾಸಾದ ಮೇವೆನ್ (ಮಾರ್ಸ್ ಅಟ್ಮಾಸ್ಫಿಯರ್ ವೊಲೆಟೈಲ್ ಇವೊಲ್ಯೂಶನ್) ನೌಕೆ ಮಂಗಳನ ವಾಯುಮಂಡಲದ ಕೂಲಂಕಷ ಅಧ್ಯಯನವನ್ನು ಆರಂಭಿಸುತ್ತಿದೆ. ಅದೊಂದೇ ಅದರ ಉದ್ದೇಶ.

ಆ ಗ್ರಹದಲ್ಲಿ ಭೂಮಿಯ ಹಾಗೆ ದಟ್ಟ ವಾಯುಮಂಡಲವಿಲ್ಲ. ಓಝೋನ್ ವಲ­ಯವೂ ಇಲ್ಲ. ಮಂಗಳನ ಸುಡುಗೆಂಪು ನೆಲಕ್ಕೆ ನಿರಂತರವಾಗಿ ಅತಿನೇರಳೆ ಮತ್ತು ಸೌರಕಿರಣಗಳ ದಾಳಿ ನಡೆಯುತ್ತಿರುತ್ತದೆ. ಆ ಕೆಂಪು ನೆಲದಲ್ಲಿ ಕೆಲ­ವೆಡೆ ಘೋರ ಶೀತ, ಇನ್ನು ಕೆಲವೆಡೆ ಉರಿಸೆಕೆ ಇರುವುದರಿಂದ ಆಗಾಗ ಪ್ರಚಂಡ ಗಾಳಿ ಬೀಸುತ್ತ, ಕೆಂದೂಳನ್ನು ಆಕಾಶಕ್ಕೆ ತೂರುತ್ತಿರುತ್ತದೆ. ಅಲ್ಲಿನ ಆಕಾಶವೆಂದರೆ ದಟ್ಟ ಸೌರಕಣ ಮತ್ತು ತೆಳುವಾದ ದೂಳುಕಣಗಳ ಚಾದರ.
ಅದನ್ನು ವಿಶ್ಲೇಷಣೆ ಮಾಡಿ­ದರೆ ಮಂಗಳದ ದುರಂತ ಚರಿತ್ರೆ ಗೊತ್ತಾ­ದೀತು. ನಮ್ಮ ಭೂಮಿಯ ಹಾಗೆ ೪೫೦ ಕೋಟಿ ವರ್ಷಗಳ ಹಿಂದೆ ಅಲ್ಲೂ ವಾಯುಮಂಡಲ ಇತ್ತು. ಅಲ್ಲಿನ ಆಕಾಶದಲ್ಲಿ ಆಮ್ಲಜನಕ, ಸಾರ­ಜನಕ ಅನಿಲಗಳೂ ದಟ್ಟಣಿಸಿದ್ದುವೇನೊ. ಆದರೆ ಹಠಾತ್ತಾಗಿ ಅಥವಾ ನಿಧಾನವಾಗಿ ಇಡೀ ವಾಯು­ಕವಚವೇ ಸಡಿಲಗೊಂಡು ಮಾಯವಾ­ಗಿದ್ದು ಹೇಗೆ? ಜೀವಿಗಳ ವಿಕಾಸದ ನಂತರ ವಾಯು­­ಕವಚ ಮಾಯವಾಯಿತೆ? ನಮ್ಮ ಭೂಮಿಯ ಮೇಲಾದರೆ ಇಲ್ಲಿ ವಿಕಾಸವಾದ ಜೀವಿ­ಗಳೇ ಇಲ್ಲಿನ ವಾಯುಮಂಡಲವನ್ನು ಭದ್ರ­ವಾಗಿ ಕಚ್ಚಿಹಿಡಿದಿದ್ದವು ಅಷ್ಟೇ ಅಲ್ಲ, ತಮಗೆ ಬೇಕೆಂದಂತೆ ಅದನ್ನು ಬದಲಾಯಿಸಿಕೊಂಡವು.
ಆದರೆ ಅಲ್ಲಿ ಮಂಗಳನ ಜೀವಿಗಳಿಗೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ ಏಕೆ? ಈ ಪ್ರಶ್ನೆಗೆ ಉತ್ತರ ಹುಡುಕುವುದು ಅಮೆರಿಕದ ನಾಸಾ ನೌಕೆಯ ಉದ್ದೇಶ. ಈಗ ಅಲ್ಲಿರುವ ತೆಳು­ವಾತಾ­ವರಣದಲ್ಲಿ ಯಾವ ಯಾವ ಅನಿಲ ಎಷ್ಟು ಪ್ರಮಾ­ಣದಲ್ಲಿ ಇದೆಯೆಂಬುದು ಗೊತ್ತಾದರೆ ಮುಂದೆ ೨೦೩೦ರ ವೇಳೆಗೆ ಮನುಷ್ಯರು ಅಲ್ಲಿ ಸೂಕ್ತ ಸಿದ್ಧತೆಯೊಂದಿಗೆ ಇಳಿಯಬಹುದು. ಇದು ಎರಡನೆಯ ಉದ್ದೇಶ.
ಭಾರತದ ನೌಕೆಗೂ ಎರಡು ಉದ್ದೇಶಗಳಿವೆ: ನಮ್ಮ ಪ್ರಜೆಗಳ ಎದೆ ಹೆಮ್ಮೆಯಿಂದ ಉಬ್ಬುವಂತೆ ಮಾಡುವ ಮೊದಲ ಉದ್ದೇಶ ನಿನ್ನೆ ಬೆಳಿಗ್ಗೆಯೇ ಈಡೇರಿದೆ. ಎರಡನೆಯ ಉದ್ದೇಶ ಏನೆಂದರೆ ಬಾಹ್ಯಾಕಾಶ ರಂಗದಲ್ಲಿ ನಾವು ದಿಟವಾಗಿ, ದಿಟ್ಟ ಹೆಜ್ಜೆ ಇಟ್ಟಿದ್ದೇವೆಂದು ಜಗತ್ತಿಗೆ ತೋರಿಸುವುದು. ಬೇರೆ ದೇಶಗಳ ಉಪಗ್ರಹಗಳನ್ನು ಕಡಿಮೆ ಶುಲ್ಕ­ದಲ್ಲಿ ಮೇಲೇರಿಸುತ್ತೇವೆಂದು ಜಾಹೀರು ಮಾಡು­ವುದು. ಬಾಹ್ಯಾಕಾಶ ‘ಉದ್ಯಮ’ದ ನಾನಾ ಬಗೆಯ ತಾಂತ್ರಿಕ ಅಗತ್ಯಗಳಿಗೆ ನಮ್ಮ ಯುವ ಜನತೆಯನ್ನು ಆಕರ್ಷಿಸುವುದು.
ಐದು ವರ್ಷಗಳ ಹಿಂದೆ ರೂಪುಗೊಂಡ ಈ ಯೋಜನೆ ಈಗ ಫಲ ಕೊಟ್ಟಿದೆ. ಈಗಿನ ಸರಕಾರದ ‘ಮೇಕ್ ಇನ್ ಇಂಡಿಯಾ’  ಘೋಷಣೆಗೆ ಸೂಕ್ತ ನೂಕುಬಲ­ವನ್ನು ಕೊಟ್ಟಿದೆ. ಮಂಗಳನೆಂಬ ಬರಡು ಜಗತ್ತನ್ನು ರೌಂಡ್ ಹೊಡೆಯುತ್ತಿರುವ ಅವೆರಡು ನೌಕೆಗಳನ್ನು ವಿಜ್ಞಾನಿ­ಗಳ ಪಾಲಿಗೆ ಬಿಟ್ಟು ನಮ್ಮ ನೆಲದ ಹಕೀಕತ್ತು ಏನೆಂಬುದನ್ನು ನೋಡಬೇಕಲ್ಲ? ಮೊನ್ನೆ ಭಾನುವಾರ ಪೃಥ್ವಿಯ ಆಕ್ರಂದನ ಜಗತ್ತಿನಾದ್ಯಂತ ಕೇಳಿಬಂತು.
ಭೂಮಿಯ ತಾಪಮಾನ ನಿರಂತರ ಏರುತ್ತಿದ್ದು, ಈ ಏರಿಕೆಗೆ ಬ್ರೇಕ್ ಹಾಕೋಣ­ವೆಂದು ಇಡೀ ಮನುಕುಲವೇ ಹಕ್ಕೊತ್ತಾಯ ಮಾಡಿದ ಹಾಗೆ, 150 ದೇಶಗಳ ಸುಮಾರು ೨,೫೦೦ ತಾಣಗಳಲ್ಲಿ ಜನರು ಮಡುಗಟ್ಟಿದರು. ನ್ಯೂಯಾರ್ಕಿನಲ್ಲಿ ಅಂದಾಜು ಮೂರುವರೆ ಲಕ್ಷ ಜನರ ಭಾರೀ ಫೇರಿಯನ್ನು ಹೊರಡಿಸಲಾಗಿತ್ತು. ಅದು, ಇದುವರೆಗಿನ ಅತಿ ದೊಡ್ಡ ಜನ ಸಮಾ­ವೇಶ ಎಂದು ಮಾಧ್ಯಮಗಳು ವರ್ಣಿಸಿದವು. ಅಲ್ಲಿ ಅಂದು ಅಮೆರಿಕದ ಸಾಹಿತ್ಯ, ಕ್ರೀಡೆ, ರಾಜ­ಕಾರಣ, ಮನರಂಜನೆ, ವಿಜ್ಞಾನ ಹೀಗೆ ಎಲ್ಲ ರಂಗ­ಗಳ ನಾಯಕರೂ ರಸ್ತೆಗಿಳಿದಿದ್ದರು.
ನ್ಯೂಯಾರ್ಕ್ ಮೇಯರ್, ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್‌ಕಿ ಮೂನ್, ಅಮೆರಿಕದ ಮಾಜಿ ಉಪಾ­ಧ್ಯಕ್ಷ ಅಲ್‌ಗೋರ್, ಸಿನಿಮಾ ನಟ ಡಿಕಾಪ್ರಿಯೊ, ವನ್ಯ­ಜೀವತಜ್ಞೆ ಜೇನ್ ಗೂಡಾಲ್, ನಮ್ಮ ವಂದನಾ ಶಿವ ಎಲ್ಲರೂ ಅಲ್ಲಿದ್ದರು. ಅದೇ ಹೊತ್ತಿಗೆ ಕೆನಡಾ ಮತ್ತು ಅಮೆರಿಕದ ಗಡಿಗುಂಟ ಸಹಸ್ರಾರು ಜನರು ಕೈಗೆ ಕೈ ಹಿಡಿದು ಸಾಲಾಗಿ ನಿಂತರು. ಬಿಸಿಭೂಮಿ ಸಮಸ್ಯೆಗೆ ಗಡಿಮಿತಿ ಇಲ್ಲ ಎಂದು ತೋರಿಸಿ­ಕೊಟ್ಟರು. ಬರ್ಲಿನ್, ಬೊಗೊಟಾ, ರಿಯೊ, ಕೊಲಂಬಿಯಾ, ಪ್ಯಾರಿಸ್, ಲಾಗೋಸ್, ಮೆಲ್ಬರ್ನ್, ಪಾಪುವಾ ನ್ಯೂಗಿನಿ ಮತ್ತು ಶಾಂತ­ಸಾಗರದ ಅನೇಕ ದ್ವೀಪ­ರಾಷ್ಟ್ರ­ಗಳಲ್ಲಿ ‘ಪೀಪಲ್ಸ್ ಕ್ಲೈಮೇಟ್ ಮಾರ್ಚ್’ ಹೆಸರಿನಲ್ಲಿ ಜನರು ಭೂಮಿಯಾತ್ರೆ ನಡೆಸಿದರು. 
ಈ ಜಾಗತಿಕ ಹಕ್ಕೊತ್ತಾಯ ಮೇಳವನ್ನು ಈಗಲೇ ನಡೆಸುವ ಉದ್ದೇಶ ಏನಿತ್ತೆಂದರೆ ಎರಡು ದಿನಗಳ ನಂತರ ಸೆಪ್ಟೆಂಬರ್ ೨೩ರಂದು ವಿಶ್ವ­ಸಂಸ್ಥೆಯ ಆಶ್ರಯದಲ್ಲಿ ‘ಹವಾಗುಣ ಶೃಂಗಸಭೆ’ ಆಯೋಜಿತವಾಗಿತ್ತು. ಹಿಂದೆ ೨೦೦೯ರಲ್ಲಿ ಕೊಪೆ­ನ್‌­ಹೇಗನ್‌ನಲ್ಲಿ ಎಲ್ಲ ರಾಷ್ಟ್ರಗಳೂ ಸಭೆ ಸೇರಿ, ಭೂಜ್ವರಕ್ಕೆ ಔಷಧವನ್ನು ನಿರ್ಧರಿಸಲು ವಿಫಲ­ವಾಗಿ­ದ್ದವು. ಈ ಐದು ವರ್ಷಗಳಲ್ಲಿ ಜ್ವರ ಇನ್ನೂ ಜಾಸ್ತಿಯಾಗಿದೆ. ಹವಾಗುಣ ಏರುಪೇರು ತೀವ್ರ­ವಾ­­ಗುತ್ತಿದೆ. ಬಿಸಿಲ ಬೇಗೆ, ಮಹಾಪೂರ, ಸುಂಟರ­ಗಾಳಿ, ಮಹಾಬರಗಳಿಂದ ಜನರು ಹೈರಾಣಾಗು­ತ್ತಿದ್ದಾರೆ, ಜೀವಕೋಟಿ ತತ್ತರಿಸು­ತ್ತಿದೆ.
ಕಳೆದ ವರ್ಷವಂತೂ ಭೂಮಿಯ ಒಟ್ಟಾರೆ ಕಾರ್ಬನ್ ಉತ್ಪನ್ನ ಹಿಂದಿನ ಎಲ್ಲ ವರ್ಷಗಳಿಗಿಂತ ಹೆಚ್ಚಾಗಿದೆ. ‘ನಿಂ­ನಿಮ್ಮಲ್ಲಿ ಕಚ್ಚಾಡಬೇಡಿ, ದಿಟ್ಟ ನಿಲುವು ತಗೊಳ್ಳಿ’ ಎಂದು ಎಲ್ಲ ರಾಷ್ಟ್ರಗಳ ಮುಖ್ಯಸ್ಥರನ್ನು ಒತ್ತಾಯಿಸಲೆಂದೇ ಅಷ್ಟೊಂದು ಮೇಳಗಳು ನಡೆದವು.   ಸಾವಿರಾರು ವಿಜ್ಞಾನಿಗಳೂ ಫಲಕ ಹಿಡಿದು ರಸ್ತೆಗೆ ಇಳಿದಿದ್ದು ಈ ಬಾರಿಯ ವಿಶೇಷವಾಗಿತ್ತು. ‘ಭೂಮಿಯ ಉಷ್ಣತೆ ಏರುತ್ತಿರುವ ಕುರಿತು ಕಳೆದ ೪೫ ವರ್ಷಗಳಿಂದ ಸಂಶೋಧನಾ ವರದಿಗಳ ಮೂಲಕ ಎಚ್ಚರಿಸಿದ್ದೆಲ್ಲ ವಿಫಲವಾಗಿದೆ.
ನಾವೂ ಬೀದಿಗಿಳಿಯಲೇಬೇಕಾಗಿದೆ’ ಎನ್ನುತ್ತ ದಕ್ಷಿಣ ಕ್ಯಾಲಿ­­ಫೋರ್ನಿಯಾ ವಿ.ವಿ.ಯ ಭೂವಿಜ್ಞಾನಿ ಜೇಮ್ಸ್ ಪೊವೆಲ್ ತನ್ನಂಥ ಅನೇಕ ವಿಜ್ಞಾನಿ­ಗಳನ್ನು ಸಂಘ­ಟಿಸಿ ಜಾಥಾ ಪ್ರವೇಶ ಮಾಡಿದ್ದಾರೆ. ‘ಚುನಾಯಿತ ಧುರೀಣರು ಮತ್ತು ಧನಿಕ ವ್ಯಕ್ತಿಗಳು ವೈಜ್ಞಾನಿಕ ಪ್ರವೃತ್ತಿಯ ಮೇಲೆ ದಾಳಿ ನಡೆಸಿ­ದ್ದಾರೆ. ನಮ್ಮನ್ನು ಉಗ್ರವಾದಿಗಳೆಂದು ಹಣೆಪಟ್ಟಿ ಕಟ್ಟಿ ಏನೆಲ್ಲ ನಿರ್ಬಂಧ ಹಾಕಲಾಗುತ್ತಿದೆ’ ಎಂದಿ­ದ್ದಾರೆ.
ನ್ಯೂಯಾರ್ಕ್ ವಿಜ್ಞಾನ ಅಕಾಡೆಮಿ ಮತ್ತು ಅಮೆರಿಕನ್ ಭೂಭೌತವಿಜ್ಞಾನ ಸಂಘಗ­ಳೆ­ರಡೂ ತಮ್ಮೆಲ್ಲ ಸದಸ್ಯರನ್ನು ಜಾಥಾಕ್ಕೆ ಹೊರಡಿಸಿ­ದ್ದವು. ‘ಸತ್ಯವನ್ನು ಅರಿಯುವ ಹಕ್ಕನ್ನು ಅನುಭವಿ­ಸುವ­ವರು ಕ್ರಿಯಾಶೀಲರಾಗಲೇ­ಬೇಕಾದ ಕರ್ತವ್ಯ­ವನ್ನೂ ನಿಭಾಯಿಸಬೇಕಾಗುತ್ತದೆ’ ಎಂದ ಐನ್‌­ಸ್ಟೀನ್ ಮಾತನ್ನು ಪುನರುಚ್ಚರಿಸಿ ನೋತ್ರೆದಾಮ್ ವಿ.ವಿ.ಯ ವಿಜ್ಞಾನಿಗಳು, ಎಮ್‌ಐಟಿ, ಕಾಲ್ಟೆಕ್, ಹಾರ್ವರ್ಡ್ ಮತ್ತು ಇತರ ಪ್ರತಿಷ್ಠಿತ ಸಂಶೋಧನ ಸಂಸ್ಥೆಗಳ ತಜ್ಞರೂ ಮೇಳವಿಸಿದ್ದರು.
ವಿಪರ್ಯಾಸ ಏನೆಂದರೆ ಭಾರತ ಮತ್ತು ಚೀನಾ ದೇಶಗಳ ನಾಯಕರು ಸೆ. ೨೩ರ ಶೃಂಗ­ಸಭೆ­ಯಲ್ಲಿ ಭಾಗವಹಿಸಲಿಲ್ಲ. ಅಲ್ಲಿಗೆ  ಹೋಗಿ­­­ರೆಂದು ಭಾರತದ ಪ್ರಧಾನಿಯನ್ನು ಒತ್ತಾ­ಯಿ­ಸಲೆಂದೇ ದಿಲ್ಲಿಯಲ್ಲಿ ಕಳೆದ ಶನಿವಾರ ಎರಡು ಸಾವಿರ ಜನರ ಪ್ರತಿಭಟನಾ ಮೆರವಣಿಗೆ ನಡೆ­ದಿತ್ತು. ಚೀನಾ, ಅಮೆರಿಕ, ಭಾರತ, ರಷ್ಯಾ ಮತ್ತು ಜಪಾನ್ ಈ ಐದು ದೇಶಗಳು ಕ್ರಮವಾಗಿ ಅತಿ ಹೆಚ್ಚು ಕಾರ್ಬನ್ ಉತ್ಪಾದಿಸುವ ಮೊದಲ ಐದು ಸ್ಥಾನಗ­ಳಲ್ಲಿವೆ.
ನಮ್ಮ ಪ್ರಧಾನಿ ಇಲ್ಲಿ ಬೆಂಗಳೂರಿ­ನಲ್ಲಿ ‘ಸ್ವಚ್ಛ ಭಾರತ ಅಭಿಯಾನ’ವನ್ನು ಘೋಷಿ­ಸುವ ಸಂದರ್ಭಕ್ಕೆ ಸರಿಯಾಗಿ ಅಲ್ಲಿ ನ್ಯೂಯಾರ್ಕಿ­ನಲ್ಲಿ ಹವಾಗುಣ ಶೃಂಗಸಭೆ ಆರಂಭವಾಗಿತ್ತು. ಇಡೀ ಭೂಗ್ರಹವನ್ನು ಸ್ವಚ್ಛ ಮಾಡುವ ಆ ಅಧಿ­ವೇಶನ­ದಲ್ಲಿ ಭಾರತದ ಪ್ರಧಾನ ಪ್ರತಿನಿಧಿಯೇ ಇರ­ಲಿಲ್ಲ. ನರೇಂದ್ರ ಮೋದಿ ನಾಡಿದ್ದು ವಿಶ್ವ­ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಾಜರಿರು­ತ್ತಾರೆ. ಈಗೇಕೆ ಹೋಗ­ಲಿಲ್ಲ? ಕಳೆದ ವಾರ ಚೀನೀ ಅಧ್ಯಕ್ಷರ ಜೊತೆಗೆ ಅಷ್ಟೆಲ್ಲ ಒಪ್ಪಂದಗಳಿಗೆ ಸಹಿ ಹಾಕುತ್ತಿ­ದ್ದಾಗ, ಭೂಗ್ರಹವನ್ನು ತಂಪುಗೊಳಿಸ­ಬಲ್ಲ ಬದಲೀ ತಂತ್ರಜ್ಞಾನ ಬಗ್ಗೆ ಅಥವಾ ಸುಸ್ಥಿರ ಅಭಿ­ವೃ­ದ್ಧಿಯ ಬಗ್ಗೆ ಏಕೆ ಚಕಾರ ಎತ್ತಲಿಲ್ಲ? -ಈ ಪ್ರಶ್ನೆ­ಗಳು ನಮ್ಮ ಮಾಧ್ಯಮಗಳಲ್ಲಿ ಚರ್ಚೆ­ಯಾ­ಗಲೇ ಇಲ್ಲ.
ಹವಾಗುಣ ಶೃಂಗಸಭೆಗೆ ೧೧೮ ರಾಷ್ಟ್ರಗಳ ಮುಖ್ಯ­ಸ್ಥರು ಹಾಜರಾಗಿರುವಾಗ ನಮ್ಮ ಪ್ರಧಾನಿಯೇಕೆ ಹೋಗಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಹೀಗಿ­ರಬಹುದು: ಈಗಿನ ಸಭೆಯ ಉದ್ದೇಶ ಏನೆಂದರೆ ಮುಂಬರುವ ಇನ್ನೂ ಮಹತ್ವದ ಚರ್ಚೆಗಳಿಗೆ ಚಾಲನೆ ನೀಡುವುದು. ಡಿಸೆಂಬರ್‌­ನಲ್ಲಿ ಪೆರು ದೇಶದ ರಾಜಧಾನಿ ಲಿಮಾದಲ್ಲಿ ರಾಷ್ಟ್ರ­­ನಾಯಕರ ಮತ್ತೊಂದು ಸಭೆ ನಡೆಯಲಿದೆ. ಭೂ­ತಾಪ ನಿಯಂತ್ರಣದ ವಿವಿಧ ಒಡಂಬಡಿಕೆಗಳು ಅಲ್ಲಿ ರೂಪುಗೊಳ್ಳು­ತ್ತವೆ.
ಆ  ಬಳಿಕ ಮುಂದಿನ ವರ್ಷ ಪ್ಯಾರಿಸ್‌ನಲ್ಲಿ ೨೦೧೫­ರಲ್ಲಿ ಉತ್ತುಂಗ ಶೃಂಗ­ಸಭೆ ನಡೆಯಲಿದ್ದು ಅಲ್ಲಿ ಎಲ್ಲ ರಾಷ್ಟ್ರಗಳೂ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ಈಗ ಪ್ರಧಾನಿ ಹೋಗಲೇ­ಬೇಕೆಂಬ ತುರ್ತೇನಿಲ್ಲ; ಇಷ್ಟಕ್ಕೂ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್ ಅಲ್ಲಿ ಈಗ ಭಾರತವನ್ನು ಪ್ರತಿನಿಧಿ­ಸುತ್ತಿದ್ದಾರೆ. ಕಾರ್ಬನ್ ಹೊರೆಯನ್ನು ತಗ್ಗಿಸುವಲ್ಲಿ ತಮ್ಮ ಹೊಸ ಸರ್ಕಾರ ಏನೇನು ಕ್ರಮ ಕೈಗೊಳ್ಳುತ್ತಿದೆ ಎಂದು ವಿವರಣೆ ನೀಡುತ್ತಿದ್ದಾರೆ. ಕಲ್ಲಿದ್ದಲ ಗಣಿ­ಗಾರಿಕೆಗೆ ಇಮ್ಮಡಿ ಮೇಲುತೆರಿಗೆ ಹಾಕಿ ೬೦೦ ಕೋಟಿ ಡಾಲರ್ ಹಣ ಸಂಗ್ರಹಿಸಿ ಅರಣ್ಯ ಬೆಳೆ­ಸುತ್ತೇವೆಂದೂ ನೀರಾವರಿ ಕಾಲುವೆ­ಗ­ಳು­ದ್ದಕ್ಕೂ ಸೌರ ಫಲಕ ಹಾಕುತ್ತೇವೆಂದೂ ಹೇಳಿದ್ದಾರೆ.
ಆದರೂ ದೊಡ್ಡ ಉದ್ಯಮಗಳಿಗೆ ಮೂಗು­ದಾಣ ಹಾಕುವ ಬದಲು ಇನ್ನಷ್ಟು ಗೋಗ್ರಾಸ ನೀಡಬೇಕೆಂಬ ಹುಮ್ಮಸ್ಸೇ ಎಲ್ಲ ಕಡೆ ಕಾಣುತ್ತಿದೆ. ಪರಿಸರ ಖಾತೆಯ ಮಹತ್ವವನ್ನು ಕಡಿಮೆ ಮಾಡುತ್ತ, ದೊಡ್ಡ ಯೋಜನೆಗಳಿಗೆ ಅಸ್ತುಪತ್ರ ಪಡೆ­ಯುವ ಮುನ್ನ ಪಾಲಿಸಬೇಕಿದ್ದ ಪರಿಸರ ನಿರ್ಬಂಧಗಳನ್ನು ಸಡಿಲಗೊಳಿಸುತ್ತ, ಅಭಿವೃದ್ಧಿಯ ರಥಕ್ಕೆ ಚೀನಾ ಅಮೆರಿಕಗಳ ಹೊಸ ಎಂಜಿನ್ ಜೋಡಿ­ಸುವ ಈ ಉತ್ಸಾಹ ಹಸುರುವಾದಿಗಳನ್ನು ಕಂಗಾಲು ಮಾಡಿದೆ.
ಮಂಗಳಲೋಕದಲ್ಲಿ ಮೀಥೇನ್ ಇದೆಯೇ ಎಂದು ಶೋಧಿಸಹೊರಟ ನಾವು ನಮ್ಮದೇ ಭೂಖಂಡಲ್ಲಿ ಮೀಥೇನನ್ನು, ಕಾರ್ಬನ್ ಡೈಆಕ್ಸೈಡನ್ನು ಹೆಚ್ಚಿಸುವ ಧಾವಂತ­ದಲ್ಲಿದ್ದೇವೆಂಬ ಆತಂಕ ಕಾಡತೊಡಗಿದೆ. ಮಂಗಳ­ಯಾನದ ಯಶಸ್ಸಿನಿಂದಾಗಿ ಭಾರತದ ಖ್ಯಾತಿ ಅಂತ­ರಿಕ್ಷಕ್ಕೇರಿದೆಯಾದರೂ ಪರಿಸರ -ಜೀವಜಾಲ ಸಂರಕ್ಷಣೆಯ ವಿಷಯದಲ್ಲಿ ಅದು ನೆಲಕಚ್ಚಿದೆ. ಅದನ್ನು ಮೇಲಕ್ಕೆತ್ತುವ ಹೊಣೆಯನ್ನು ಬರೀ ವಿಜ್ಞಾನಿಗಳ ಅಥವಾ ಕ್ರೀಡಾಳುಗಳ ಹೆಗಲ ಮೇಲಿಡಲಾದೀತೆ? 
‘ನನ್ನಂಥ ಬಾಲಕರ ಕನಸು ಏನೆಂದರೆ ಇನ್ನು ೩೦ ವರ್ಷಗಳಲ್ಲಿ ಮಂಗಳಲೋಕದಲ್ಲಿ ಭಾರತೀ­ಯರು ಮನೆ ಕಟ್ಟಬೇಕು’ ಎಂದು ನಿನ್ನೆ ಖುಷಿ­ಯಲ್ಲಿ ಯಾವುದೋ ಸುದ್ದಿವಾಹಿನಿಗೆ ವಿದ್ಯಾರ್ಥಿ­ಯೊಬ್ಬ ಹೇಳುತ್ತಿದ್ದ. ಆ ಬಾಲಕನ ಅಂಥ ಅಮಂಗಳ ಮಾತುಗಳನ್ನು ಕ್ಷಮಿಸೋಣ. ನಮ್ಮ ಈ ಸುಂದರ ಭೂಮಿಯನ್ನು ಬಿಸಿಗೋಲವನ್ನಾಗಿ ಮಾಡಿ, ಮಂಗಳನ ರುಗ್ಣಭೂಮಿಯಲ್ಲಿ ಮನೆ ಕಟ್ಟಬೇಕಾದ ದುರ್ಗತಿ ಮನುಕುಲಕ್ಕೆ ಎಂದೂ ಬಾರದಿರಲೆಂದು ಆಶಿಸೋಣ. 

Sunday 21 September 2014

A STEP TOWARDS CONNECTING CHILDREN BACK TO NATURE … S J Srinivasa, RMNH, Mysore


The inaugural session

Regional Museum of Natural History, Mysore in collaboration with Hasiru Hejje recently organized a TEACHER TRAINING WORKSHOP for the middle school teachers working in semi urban environment in the month of September -2014. 
40 teachers were selected who are employed in and around the small town BANNURU, T. NARASIPURA TALUK, MYSORE DISTRICT. this place is a well-known for its rice market and home for an indigenous sheep breed called “BANNURU KURI/BANDOORU KURI”.
Ice-breaker
Various activities were designed based on their curriculum. It included formal, non-formal learning skills, dealing with learning disability, managing classroom environment, discussions on cognizance disability etc,. A trek /walk in wild, theater, self counselling and stress management are other few.
Indoor classroom activity
SRI VIVEKANANDA EDUCATION SOCIETY, a rural school which follows the Sri RamaKrishna & Sri Vivekananada philosophy agreed to host the programme.
The programme was inaugurated by Smt. Pushpavati Amaranath- designated zilla parishat president, Mysore zilla panchayat, Govt of Karnataka, and a post doctoral fellow in botany from Mysore University. She spoke on the importance of clean & neat environment in learning and living place, the essentiality of using a toilet for defecating teacher’s involvement in creating the urge to use toilet in rural children. The block education officer stressed upon importance of clean environment and practicing pro-environmental attitude voluntarily.

Trek/nature walk
This outdoor bustle brought down the nervousness of the teachers and gave a feeling that they too are learners. As soon as they got acclimatize they were ready to take up the next exercise – a short walk in the vast garden of the school lined by a running water channel for cultivation. They were pooled into 8 groups. Each group was entrusted with a specific task. The outcome was so astounding, which enhanced their enthusiasm to perform vibrantly. There were group plays, interaction and skits, and each participant took part in either singing, dancing or oratory.Thus ended the first day anticipating a field trip to the nearby reserve forest the following morning.
Walking in the woods session was headed by Mr. Manu Krishnamurthy. An appealing shiny day for trek, teachers with all cheers ready to welcome whatever comes in their way. The VODGAL RANGASWAMY BETTA, recently designated as RESERVE FOREST status was ready to receive this group which had a drizzle in the previous night. The dust free, pleasant shiny green, the deep blue sky with pieces of cottony clouds sailing, gave a warm and energetic welcome to the participants. A hillock measuring about 200 Mt MSL, is studded with secondary scrub jungle species is also housing innumerable insects, small game and occasional visit of LEOPARDS and rarely wandering elephants!
Nature games
The group left the school early in the morning. On reaching the foothill, they were divided into different groups, & sent to explore the nearby places. As per the whispers heard through the passing wind, this is for the first time in their life they had come out with such liberty and guidance.
Slowly along with the rising sun to the zenith, the group too climbed the hill. They were searching for clues, looking for the wildlife in the utter silence and anguish. They were introduced to the field tracking techniques. A group passing near by the steps could find a TAILOR BIRD’S NEST, which initiated others too to look forward. Some of them could locate animal palate, feathers, fungus, dry fruit shells etc.  Mr. Manu explained how such clues give vital information of the fauna around them.
Ground Orchid
Mr.S.J.Srinivasa took them to the other part of the hill which is not in much in use by the villagers. There exixts the presiding deity RANGANATHA. There the group could find a ground ORCHID too. They were shown huge honey combs hung underneath huge rock formations caved in. The collected rain water in some places which houses several variety of aquatic insects, rarely fish and in this season amphibians.

Psychology session








An interesting, eye opening and mind blogging interactive session with Smt.Champa Jaiprakash a Psycologist gave insights on how one can bring the slow learning children or hyperactive children to the classroom environment. This interaction blown open a vista of techniques which made a teacher to understand their pupils better and help them lead a normal life. 


Theater activity with Jeevan
Mr. Jeevan, a theater personality took up the next task.Teachers were divided into two heterogeneous groups on the third day to put on class room and field trials. When one group was given account of how to reach the children in classroom following the prescribed syllabus, the other group would perform the same in the field, equipped with the filed activities.

Participants enacting
The three day event concluded with a befitting valedictory function. There were a whole lot of dignitaries on the dais ranging from the DDPI to local politicians and officials leaving Bannur Town. With a lot of  ceremonial talks the right spirit would take off.

ಆಧುನಿಕತೆಯ ಅಂಧಕಾರದಲ್ಲಿ ನಕ್ಷತ್ರ ಕಂದೀಲು! ತುರುವೇಕೆರೆ ಪ್ರಸಾದ್

ಕೃಪೆ: ಪ್ರ

ಜಾವಾಣಿ > ಪುರವಣಿ ಸಾಪ್ತಾಹಿಕ ಪುರವಣಿ  Sun, 09/21/2014 
ಇತ್ತೀಚೆಗೆ ಕಲ್ಲಿದ್ದಲು ಕೊರತೆಯಿಂದ ರಾಯಚೂರಿನ ವಿದ್ಯುತ್‌ ಘಟಕಗಳು ಸ್ಥಗಿತಗೊಂಡು, ಅದರ ಪರಿಣಾಮವಾಗಿ ನಮ್ಮೂರು ಕತ್ತಲಲ್ಲಿ ಮುಳುಗಿತ್ತು. ಇಡೀ ಊರಲ್ಲಿದ್ದ ಯುಪಿಎಸ್‌ಗಳೆಲ್ಲಾ ಬೆಳಗಿನಿಂದ ಉರಿದು ಖಾಲಿಯಾಗಿದ್ದವು. ಮನೆಗಳಲ್ಲಿ ಟೀವಿಯ ಸದ್ದಿಲ್ಲದೆ ಒಂದು ರೀತಿಯ ಪ್ರಶಾಂತ ಮೌನ ಆವರಿಸಿತ್ತು. ಮನೆಗಳು ಮಾತ್ರವಲ್ಲ, ಸುತ್ತಮುತ್ತಲಿನ ಪರಿಸರವೂ ಸಹ ನೀರವ ಮೌನದಲ್ಲಿ ಮುಳುಗಿಹೋಗಿತ್ತು. ಮಿಕ್ಸಿ, ಗ್ರೈಂಡರ್‌ಗಳ ಸದ್ದಿಲ್ಲ.
ಸುತ್ತಮುತ್ತಲಿನ ಸಾಮಿಲ್, ಪ್ಲೇನಿಂಗ್ ಮಿಲ್‌ಗಳ ಕರ್ಕಶ ಶಬ್ದವಿಲ್ಲ. ಈ ಪ್ರಶಾಂತ ಇರುಳು, ಸುಮಾರು 30 ವರ್ಷಗಳ ಹಿಂದೆ ಆಧುನಿಕತೆ ಪ್ರವೇಶಿಸದ ಆ ಕಾಲದ ಗುಯ್‌ಗುಡುವ ಮೌನರಾತ್ರಿಗಳನ್ನು ನೆನಪಿಸಿತು. ಆ ನೆನಪಿನಲ್ಲೇ ಮುಳುಗೇಳುತ್ತಾ ವಾಸ್ತವದತ್ತ ಗಮನ ಹರಿಸಿದೆ. ಆದರೆ ನನ್ನ ಸುತ್ತಮುತ್ತಲಿನವರಾರಿಗೂ ಈ ತನ್ಮಯತೆ, ಪ್ರಶಾಂತತೆಯನ್ನು ಆಸ್ವಾದಿಸುವ ವ್ಯವಧಾನವಿರಲಿಲ್ಲ. ಕಾಲಗರ್ಭದೊಳಗೆ ಪಯಣಿಸುವ, ನೆನಪಿನಾಳಕ್ಕೆ ಇಳಿಯುವ ಪ್ರಶಾಂತ ಮನಸ್ಥಿತಿ ಇದ್ದಂತಿರಲಿಲ್ಲ. ಎಲ್ಲರೂ ಏನೋ ಒಂದು ರೀತಿಯ ಚಡಪಡಿಕೆಯಲ್ಲಿದ್ದರು.
ಗೃಹಿಣಿಯರು ‘ಕರೆಂಟ್ ಬಾರದಿದ್ದರೆ ಅಡುಗೆ ಆಗುವುದು ಯಾವಾಗ?’, ‘...ಅಯ್ಯೋ! ಹಾಳಾದ್ದು ಸೀರಿಯಲ್ ಮಿಸ್ಸಾಗಿ ಹೋಯಿತಲ್ಲ! ಹೀಗೆ ಅಂತ ಗೊತ್ತಿದ್ರೆ ನಾನು, ನಮ್ಮೆಜಮಾನರು ಸಿನಿಮಾಕ್ಕಾದರೂ ಹೋಗ್ತಿದ್ವಿ! (ಅಲ್ಲಿ ಜನರೇಟರ್ ಇರುತ್ತಲ್ಲ!)’ ಎಂದು ಅಸಹನೆಯಿಂದ ಗೊಣಗುವವರೇ ಹೆಚ್ಚಾಗಿದ್ದರು. ನನ್ನ ಸ್ನೇಹಿತರೊಬ್ಬರ ಮನೆಯೊಳಗಿನ ಟೀವಿ, ಮಿಕ್ಸರ್, ಗ್ರೈಂಡರ್ ಮುಂತಾದ ಯಂತ್ರಗಳಂತೆ ಮಕ್ಕಳೂ ಸ್ತಬ್ಧವಾಗಿಬಿಟ್ಟಿದ್ದರು. ಅಕ್ಕಪಕ್ಕದ ಮನೆ ಮಕ್ಕಳೂ ಸೇರಿದಂತೆ ಎಲ್ಲಾ ಒಂದೆಡೆ ಗರಬಡಿದವರಂತೆ ಕುಳಿತುಬಿಟ್ಟಿದ್ದರು.
ಕಾರ್ಟೂನ್ ಶೋ ನೋಡಲು ಟೀವಿ ಇಲ್ಲ, ಕಂಪ್ಯೂಟರ್‌ನಲ್ಲಿ ಆಡೋಣವೆಂದರೆ ಯುಪಿಎಸ್ ಖಾಲಿ! ವೀಡಿಯೋ ಗೇಮ್ ಆಡಲು ಸೆಲ್ ಡೌನ್! ಅಮ್ಮನ ಮೊಬೈಲ್ ಕಿತ್ಕೊಂಡು ಗೇಮ್ಸ್ ಆಡೋಣವೆಂದರೆ ಅದರಲ್ಲಿ ಬ್ಯಾಟರಿ ಇರುವುದು ಒಂದೇ ಕಡ್ಡಿ! ಹೊರಗೆ ರಸ್ತೆಯಲ್ಲಿ ಆಡೋಣವೆಂದರೆ ಕತ್ತಲು. ಎಷ್ಟೋ ವರ್ಷಗಳ ನಂತರ, ಪ್ರಾಯಶಃ ಕೆಲ ಮಕ್ಕಳು ಜೀವನದಲ್ಲಿ ಮೊದಲ ಬಾರಿಗೆ ಈ ರೀತಿಯ ಅಂಧಕಾರದಲ್ಲಿ ಕುಳಿತಿರುವಂತೆ ಮಂಕಾಗಿದ್ದರು. ಯಾವುದೋ ತೀವ್ರ ಬಿಕ್ಕಟ್ಟಿಗೆ ಒಳಗಾದವರಂತೆ ಆರ್ತರಾಗಿ ಕುಳಿತುಬಿಟ್ಟಿದ್ದರು!ಪೆಚ್ಚಾಗಿ ಕುಳಿತ ಮಕ್ಕಳನ್ನು– ‘ಏನ್ ಮಾಡ್ತಿದೀರ ಎಲ್ಲಾ?’ ಎಂದೆ. ‘ಕರೆಂಟೇ ಇಲ್ಲ, ಏನು ಮಾಡೋದು? ಸುಮ್ನೆ ತೂಕಡಿಸುತ್ತಾ ಕೂತಿದೀವಿ’ ಅಂದ್ಲು ಒಬ್ಬಳು ಪುಟಾಣಿ. 
‘ಯಾವುದಾದರೂ ಹಾಡು ಹೇಳಿ’ ಅಂದೆ. ಸಿನಿಮಾ ಹಾಡು ಬಿಟ್ಟರೆ ಬೇರೆ ಯಾವುದೇ ಭಕ್ತಿಗೀತೆಯಾಗಲೀ, ಜನಪದ ಗೀತೆಯಾಗಲೀ ಯಾರಿಗೂ ಗೊತ್ತಿರಲಿಲ್ಲ. ಒಬ್ಬರಿಗೊಬ್ಬರು ಒಗಟು ಹೇಳಿ ಅಂದೆ. ಎಲ್ಲೋ ಒಂದೆರಡು ಒಗಟು ಈಚೆ ಬಂದವೇ ಹೊರತು ಮತ್ತೆ ಎಲ್ಲಾ ಮುಖ ಒಣಗಿಸಿಕೊಂಡು ಕೂತವು. ಗಾದೆಯಂತೂ ಹೊರಡಲೇ ಇಲ್ಲ. ‘ಕವಡೆ, ಪಗಡೆ, ಅಳುಗುಣಿ ಮಣೆ ಏನಾದರೂ ಇದ್ರೆ ತಗೊಂಡು ಬನ್ನಿ’ ಎಂದೆ. ‘ಅವೆಲ್ಲ ಏನು?’ ಎನ್ನುವಂತೆ ವಿಚಿತ್ರವಾಗಿ ಮುಖ ಮುಖ ನೋಡಿದವು. ಇವೆಲ್ಲಾ ಏನೂ ಇಲ್ಲ ಎಂದು ತಲೆ ಅಲ್ಲಾಡಿಸಿದವು. ಕೊನೆಗೆ ಒಂದು ಮಗು ಎದ್ದು ಹೋಗಿ ಅವರಪ್ಪ ಆಡುತ್ತಿದ್ದ ಇಸ್ಪೀಟ್ ಪ್ಯಾಕ್ ತಂದಿತು.
ಏನೋ ಯೋಚಿಸಿದ ನಾನು ‘ಸರಿ ಬನ್ನಿ!’ ಎಂದು ಮಕ್ಕಳನ್ನು ಕರೆದುಕೊಂಡು ಟೆರೇಸ್ ಮೇಲೆ ಬಂದೆ. ನೆತ್ತಿಯ ಮೇಲಿನ ಶುಭ್ರ ಆಕಾಶದ ತುಂಬಾ ಹೊಳೆಯುವ ನಕ್ಷತ್ರಗಳು, ಗ್ರಹಗಳು! ಹಾಲುಚೆಲ್ಲಿದಂತೆ ದಕ್ಷಿಣದಿಂದ ಉತ್ತರಕ್ಕೆ ಹಾದು ಹೋಗಿದ್ದ ಕ್ಷೀರಪಥ! ‘ಮಕ್ಕಳೇ ಮೇಲೆ ನೋಡಿ’ ಎಂದೆ. ‘ವಾಹ್! ಆಕಾಶದಲ್ಲಿ ಇಷ್ಟೊಂದು ನಕ್ಷತ್ರ ಇರುತ್ತಾ?’ ಎಂದು ಮಕ್ಕಳು ಆಶ್ಚರ್ಯಪಟ್ಟರು. ‘ಅಲ್ಲಿ ಯಾವ್ಯಾವ ನಕ್ಷತ್ರ ಇವೆ ಎಂದು ಯಾರಾದರೂ ಗುರುತಿಸಿ ಹೇಳ್ತೀರಾ?’ ಎಂದು ಕೇಳಿದೆ. ಅಯಾರಿಗೂ ಯಾವ ನಕ್ಷತ್ರದ ಪರಿಚಯವೂ ಇರಲಿಲ್ಲ. ಧ್ರುವ ನಕ್ಷತ್ರ, ಸಪ್ತರ್ಷಿಮಂಡಲ, ಶನಿ, ಗುರು, ಶುಕ್ರ ಮುಂತಾದ ಪ್ರಮುಖ ಆಕಾಶಕಾಯಗಳನ್ನು ಗುರುತಿಸಲೂ ಸಾಧ್ಯವಾಗಲಿಲ್ಲ. ಸಿಂಹ, ವೃಶ್ಚಿಕ ರಾಶಿಯಲ್ಲಿನ ನಕ್ಷತಗಳನ್ನು ನೋಡಿ ಮಕ್ಕಳು ಅಚ್ಚರಿಪಟ್ಟರು.  
ಕುಂತಿ, ನಕುಲ, ದ್ರೌಪದಿ ಮೊದಲಾದ ಪುಂಜಗಳ ಹೆಸರಿನ ಹಿಂದಿನ ಗ್ರೀಕ್ ಪುರಾಣದ ದಂತಕತೆಗಳನ್ನು ಕೇಳಿ ಖುಷಿಪಟ್ಟರು. ಹಲವು ಮಕ್ಕಳು ಜೀವಮಾನದಲ್ಲಿ ಒಮ್ಮೆಯೂ ಕತ್ತೆತ್ತಿ ಆಕಾಶದ ಕಡೆ ನೋಡಿರಲಿಲ್ಲ. ಆಧುನಿಕತೆಯ ಪ್ರತೀಕವಾದ  ಪ್ರಜ್ವಲಿಸುವ ಮರ್ಕ್ಯುರಿ, ಸೋಡಿಯಂ ಲ್ಯಾಂಪಿನ ದೀಪಗಳ ಪ್ರಭಾವಳಿಯ ಆಚೆ  ಅವರಿಗೆಂದೂ ಕತ್ತೆತ್ತಿ ನೋಡುವ ಅಗತ್ಯ ಬಿದ್ದಿರಲಿಲ್ಲ. ಹಾಗೊಂದು ವೇಳೆ ನೋಡುವ ಪ್ರಯತ್ನ ಮಾಡಿದ್ದರೂ ಅವರಿಗೆ ಪಟ್ಟಣದ ಪ್ರಖರ ದೀಪಗಳ ನಡುವೆ ಏನೂ ಕಾಣುತ್ತಲೂ ಇರಲಿಲ್ಲ. ಅವರನ್ನು ಊರಿನ ಹೊರವಲಯಕ್ಕೆ ಕರೆದೊಯ್ದು ಅವರಿಗೆ ಆಕಾಶ, ನಕ್ಷತ್ರಪುಂಜಗಳು, ಗ್ರಹಗಳನ್ನು ಪರಿಚಯಿಸುವ ಕೆಲಸವನ್ನು ಮಾಡಲು ಯಾಂತ್ರಿಕ ಬದುಕಿನಲ್ಲಿ ತಂದೆ-ತಾಯಿಗಳಿಗೆ ಪುರಸೊತ್ತಾದರೂ ಎಲ್ಲಿ?
ಮಕ್ಕಳಲ್ಲಿ ಒಂದು ಹುಡುಗಿ ತೀರಾ ಚಿಂತಿತಳಾಗಿದ್ದಳು. ಅವಳೊಂದು ಅಸೈನ್‌ಮೆಂಟ್ ಮಾಡಬೇಕಿತ್ತು. ಅದಕ್ಕೆ ಕರೆಂಟ್ ಇಲ್ಲವಲ್ಲ ಎಂಬ ಯೋಚನೆ ಅವಳದು. ‘ಅಸೈನ್‌ಮೆಂಟ್ ವಿಷಯ ಏನು?’ ಎಂದೆ. ಅದಕ್ಕವಳು ‘ನೆಲದೊಳಗಿನ ಸಂಪತ್ತುಗಳು, ಭೂ ಸಂಪನ್ಮೂಲಗಳ ಸುಸ್ಥಿರ ಬಳಕೆ ಹಾಗೂ ಜಮೀನಿನ ಬಳಕೆ ಕುರಿತ ಜನಜನಿತ ಜ್ಞಾನ’- ಈ ಮೂರು ವಿಷಯದಲ್ಲಿ  ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ? ಎಂದು ಕೇಳಿದಳು. ನಾನು ‘ಜಮೀನು ಬಳಕೆ ಕುರಿತು ಜನಜನಿತ ಜ್ಞಾನದ’ ಬಗ್ಗೆ ಅಸೈನ್‌ಮೆಂಟ್ ಬರೆಯುವಂತೆ ಸೂಚಿಸಿದೆ. ‘ಅದಕ್ಕೆ ಇಂಟರ್‌ನೆಟ್‌ನಲ್ಲಿ ವಿಷಯ ಸಿಗುತ್ತಾ?’ ಎಂದು ಕೇಳಿದಳು. ‘ಈ ವಿಷಯಕ್ಕೆ ಇಂಟರ್‌ನೆಟ್‌ನಲ್ಲಿ ಹೆಚ್ಚಿನ ವಿಷಯ ಸಿಗಲಾರದು. ನೀನೇ ಕೆಲವು ಕೃಷಿಕರನ್ನ ಸಂಪರ್ಕಿಸಿ ಮಾಹಿತಿ ಸಂಗ್ರಹಿಸಬೇಕು’ ಎಂದೆ. ಆ ಹುಡುಗಿ ‘ಅಯ್ಯೋ ಅದನ್ನೆಲ್ಲಾ ಯಾರು ಮಾಡ್ತಾರೆ?’ ಎಂದು ಮುಖ ಬಾಡಿಸಿಕೊಂಡಳು.
ಮಕ್ಕಳು ಬೆಳೆಯುತ್ತಿರುವ ಪರಿ, ಅವರ ಚಿಂತನಾ ಧಾಟಿಯನ್ನು ನೋಡಿ ಗಾಬರಿ ಆಯಿತು. ಆಧುನಿಕತೆ, ನಾಗರಿಕತೆಯ ಸೌಲಭ್ಯಗಳು ಹಾಗೂ ಪರಿಕರಗಳಿಗೆ ಒಗ್ಗಿಕೊಂಡಿರುವ ನಮ್ಮ ಮಕ್ಕಳಿಗೆ ಅದಿಲ್ಲದಿದ್ದರೆ ಅರೆಕ್ಷಣವೂ ಜೀವಿಸಲು ಸಾಧ್ಯವಿಲ್ಲ ಎಂಬಂತಾಗಿದೆ. ನವಮಾಧ್ಯಮಗಳ ಪ್ರಭಾವದಿಂದಾಗಿ ಮಕ್ಕಳು ಪ್ರಕೃತಿಯ ವಿಸ್ಮಯಗಳನ್ನು ನೋಡುವುದನ್ನು, ಅವುಗಳಿಗೆ ಸ್ಪಂದಿಸುವ ಸಹಜಗುಣವನ್ನು ಮರೆತೇ ಹೋಗಿವೆ, ಕೀ ಕೊಟ್ಟ ಯಂತ್ರಗಳಾಗಿವೆ.
ಆಧುನಿಕ ಮಾಧ್ಯಮಗಳಿಗೆ ಅತಿಯಾಗಿ ತೆರೆದುಕೊಂಡ ಪರಿಣಾಮವಾಗಿ ಮಕ್ಕಳಲ್ಲಿರಬೇಕಾದ ಸಹಜ ಕುತೂಹಲ, ಮುಗ್ಧತೆ  ಮುಕ್ಕಾಗಿಹೋಗಿದೆ. ಗಿಡ, ಮರ, ಹಕ್ಕಿ, ಪಕ್ಷಿ, ಬೆಟ್ಟ, ಗುಡ್ಡ ,ಆಕಾಶ, ನಕ್ಷತ್ರಗಳೆಲ್ಲಾ ವೀಡಿಯೋ ಗೇಮಿನ ಥ್ರೀಡಿ ಚಿತ್ರಗಳಾಗಿ ನಿಜಸ್ಪಂದನವನ್ನು ಕಳೆದುಕೊಂಡಿವೆ. ಯಂತ್ರ, ತಂತ್ರಜ್ಞಾನ ಸ್ತಬ್ಧವಾದರೆ  ಯುವಪೀಳಿಗೆ ಜೀವಂತಿಕೆಯನ್ನೇ ಕಳೆದುಕೊಳ್ಳುವ ಸ್ಥಿತಿ ತಲುಪಿರುವುದು ನನ್ನ ದೃಷ್ಟಿಯಲ್ಲಿ ಘೋರ ದುರಂತ ಎನ್ನಿಸುತ್ತದೆ.
ಪೋಷಕರು ಮತ್ತು ಗುರುಗಳು ಮಕ್ಕಳಿಗೆ ನಮ್ಮ ಪರಂಪರೆ, ದೇಸೀ ಜ್ಞಾನ ಹಾಗೂ ಪ್ರಕೃತಿಯ ರಹಸ್ಯಗಳನ್ನು ಶೋಧಿಸುವ ಮತ್ತು ಅವುಗಳಲ್ಲಿ ತಾದ್ಯಾತ್ಮ ಬೆಳೆಸಿಕೊಳ್ಳುವ ಪಾಠ ಹೇಳಿಕೊಡಬೇಕಿದೆ. ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು, ಆಧುನಿಕ ಬೆಳಕಿನಾಚೆಯ ಪ್ರಖರ ನಕ್ಷತ್ರ ದರ್ಶನವನ್ನು ಅವರಿಗೆ ಮಾಡಿಸಬೇಕಿದೆ.

Our very own Frog Prince!

http://www.newindianexpress.com/magazine/A-Croak-and-Tell-Story/2014/09/21/article2439272.ece